ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪೂರದಿಂದ ದೊಮ್ಮಸಂದ್ರಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂದಾಪೂರದ ಸಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಎದುರುಗಡೆ ಹೋರಾಟ ಮಾಡಲಾಗಿತ್ತು. ಹೋರಾಟದ ಕೆಲವು ದಿನಗಳ ನಂತರ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ಕಳಪೆ ಕಾಮಗಾರಿ ಮಾಡಿರುವುದರಿಂದ ವಾಹನಗಳು ಓಡಾಡುವಾಗ ನೋಡಕ್ಕಾಗದಷ್ಟು ಧೂಳು ಏಳುತ್ತಿತ್ತು.