ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..! ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿಯೇ ಸುಮಾರು 5000ಕ್ಕೂ ಹೆಚ್ಚು ಬಿ.ಪಿ.ಎಲ್. ಕಾಡ್೯ ರದ್ದು ಮಾಡಲಾಗಿದೆ. ಆನೇಕಲ್ ತಾಲೂಕಿನ ತಹಸೀಲ್ದಾರರವರ ಕಾಯ೯ಲದಲ್ಲಿರುವ ಆಹಾರ ಇಲಾಖೆಯಲ್ಲಿ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಪಡಿತರ ಚೀಟಿದಾರರ ಹಾಗೂ ಅದರಲ್ಲಿರುವ ಸದಸ್ಯರ ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ವಗಾ೯ವಣೆಯಾಗಿರುವ ಹಿನ್ನೆಲೆಯಲ್ಲಿ ಬಿ.ಪಿ.ಎಲ್. ಕಾಡು೯ ಎ.ಪಿಎಲ್.ಗೆ ಬದಲಾವಣೆಯಾಗಿದೆ ಅಂತ ಆನೇಕಲ್ ಆಹಾರ ಇಲಾಖೆಯಲ್ಲಿ ಹೇಳಲಾಗುತ್ತಿದೆ. ಹಣ ವಗಾ೯ವಣೆಯಾಗುರುವ ಬಗ್ಗೆ ಕನಿಷ್ಠ ಆರು ತಿಂಗಳ ಬ್ಯಾಂಕ್ ವರದಿ ತರಲು ತಿಳಿಸಲಾಗುತ್ತಿದೆ.