ಸ್ಕ್ಯಾಂ: ಗುಲಿಮಂಗಲದಲ್ಲಿ ಅನಹ೯ ಫಲಾನುಭವಿಗಳಿಗೆ RGHCL ಫ್ಲ್ಯಾಟ್ ಮಂಜೂರಾತಿ
ಸ್ಕ್ಯಾಂ: ಗುಲಿಮಂಗಲದಲ್ಲಿ ಅನಹ೯ ಫಲಾನುಭವಿಗಳಿಗೆ RGHCL ಫ್ಲ್ಯಾಟ್ ಮಂಜೂರಾತಿ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳ್ಳಿ ಗ್ರಾಮ ಮೂಲ ನಿವಾಸಿಯಾದ ಶ್ರೀ ಜಮಲೂದ್ದಿನ್ ತಂದೆ ಹಸ್ಸನ್ಸಾಬ ಎಂಬುವರು ಕೆಲವು ವಷ೯ಗಳಿಂದ ಬೆಂಗಳೂರಿನ ಆನೇಕಲ್ ತಾಲೂಕಿನ ಹೀಲಾಲಿಗೆ ಗ್ರಾಮದಲ್ಲಿ ವಾಸಸಿದ್ದು, ಇವರು ಬೆಂಡೆಬೆಂಬಳ್ಳಿ ಮತ್ತು ಹೀಲಾಲಿಗೆ ಏರಡು ಕಡೆ ಮತದಾರರ ಚೀಟಿ ಹಾಗೂ ಪಡಿತರ ಚೀಟಿಗಳನ್ನು ಮಾಡಿಕೊಂಡಿದ್ದಾರೆ. ಸದರಿ ಜಮಾಲೂದ್ದಿನ್ ಎಂಬುವವರಿಗೆ ಇಬ್ಬರು ಪತ್ನಿಯರಿದ್ದು, ಇಬ್ಬರು ಸಹ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಪೇಜ್ ಇಂಡಸ್ಟ್ರೀಜ್ (ಜಾಕಿ) ಲಿಮಿಟೆಡ್ ಘಟಕ-11, ಸಂ.252-A2, ಹೆನ್ನಾಗರ ಗೇಟ್, ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕಾಯ೯ನಿವ೯ಹಿಸುತ್ತಿದ್ದಾರೆ. ಇವರಿಗೆ ಪ್ರತಿ ತಿಂಗಳು ರೂ.20,000 ವೇತನ ಇರುವುದಾಗಿ ತಿಳಿದು ಬಂದಿದ್ದು, ಮೋದಲ ಪತ್ನಿಯಾದ ಕಥಲ್ ಬೀ ಕಂದಾಯ ಇಲಾಖೆ ಮತ್ತು ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ, ಆದಾಯ (RD1218026010718, RD1218026010717) ಪ್ರಮಾಣ ಪತ್ರಗಳು ಮತ್ತು ಪಡಿತರ ಚೀಟಿ ಪಡೆದಿದ್ದಾರೆ.
ಜಮಲೂದ್ದಿನ್ ಸಹ ಕುಟುಂಬದ ಒಟ್ಟು ವಾಷಿ೯ಕ ಆದಾಯ ಕೇವಲ 1.2 ಲಕ್ಷ ಅಂತ ಸುಳ್ಳು ಮಾಹಿತಿ ನೀಡಿ, ಕಡಿಮೆ ಆದಾಯ ಇರುವುದಾಗಿ ಪ್ರಮಾಣ ಪತ್ರಗಳನ್ನು ಮಂಜೂರಿ ಮಾಡಿಕೊಂಡು ಆನೇಕಲ್ ತಾಲೂಕಿನ ಗುಲಿಮಂಗಲದ RGHCL ಅಪಾಟ್೯ಮೆಂಟ್ಸ್, ಸವೆ೯ 67, Block-A, ಹುಸ್ಕೂರ್ ರೋಡ್ ಗುಲಿಮಂಗಲದಲ್ಲಿ 1 BHK ಫ್ಲ್ಯಾಟ್ನ್ನು (ಫ್ಲ್ಯಾಟ್ ಸಂ.1012) ದಿನಾಂಕ 24-06-2025 ರಂದು ಮಂಜೂರಿ (ಅಜಿ೯ ಸಂ. 20216059401) ಮಾಡಿಕೊಂಡಿದ್ದಾರೆ.
ಜಮಲೂದ್ದಿನ್ ಖಾಸಗಿ ವಾಹನ ಚಾಲಕರಾಗಿದ್ದು, ತಮ್ಮ ಮಕ್ಕಳು ಹಾಗೂ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ. ಹೀಲಾಲಿಗೆ ಗ್ರಾಮದ ವಿಸ್ಮಯ ಕಾಲೇಜ್ ಎದುರುಗಡೆ ಒಂದು ಚಿಕನ್ ಶಾಪ್ ಇದೆ. ಬಡತನ ರೇಖೆಗೆ ಒಳಪಡುವುದಿಲ್ಲ. ಆದರೂ ಕೂಡ ಇವರು BPL (RC No 520100265026) ಪಡಿತರ ಚೀಡಿ ಹೊಂದಿದ್ದಾರೆ. ಜಮಲೂದ್ದಿನ್ರವರ ಒಟ್ಟು ವಾಷಿ೯ಕ ಆದಾಯವು ರೂ.12 ಲಕ್ಷಕ್ಕೂ ಮೀರಿದೆ. ಇವರು 3 ದ್ವೀ -ಚಕ್ರ ವಾಹನಗಳು ಮತ್ತು 1 ಕಾರ್ ಹೊಂದಿದ್ದರೂ ಕೂಡ ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯ ಭ್ರಷ್ಠ ಅಧಿಕಾರಿಗಳು ಲಂಚ ಪಡೆದು ಕಡಿಮೆ ಆದಾಯ ಇರುವುದಾಗಿ ವರದಿ ಮಾಡಿ ಶ್ರೀಮಂತರನ್ನು ಬಡವರು ಅಂತ “ಬಡತನ ಪ್ರಮಾಣ” ಪತ್ರಗಳನ್ನು ವಿತರಿಸುತ್ತಿದ್ದಾರೆ. ಕೇವಲ ಆರೇ ತಿಂಗಳಲ್ಲಿ ರೂ.10,53,001 ರಷ್ಟು ವ್ಯವಹಾರ ಮಾಡುವ ವ್ಯಕ್ತಿ ಹೇಗೆ ಬಡವನಾಗುತ್ತಾನೆ ..? ಎಂಬುದೆ ಕಾಡುತ್ತಿರುವ ಪ್ರಶ್ನೆ ಯಾಗಿದೆ.
